Sunday, February 3, 2019

ನಾನು ಬೇರೆ ನೀನು ಬೇರೆ ಎಂದರದುವೆ ವಿಕೃತಿ
ಬೇರೊಂದೇ ನಾವ್ ಕವಲೆನೆ ಭಾರತೀಯ ಸಂಸ್ಕೃತಿ
ನಾವೆಲ್ಲರೂ ಒಂದೇ ಎನಲು ಭಾರತೀಯ ಸಂಸ್ಕೃತಿ

ರಾಷ್ಟ್ರಕೀರ್ತಿ ನಭಕೆ ಒಯ್ದ ವೀರಶ್ರೀ ವಿವೇಕಾನಂದ
ಪಡುವಣಿಗರ ತಿಮಿರಳಿಸಲು ಮೂಡಣದಲಿ ಉದಿಸಿದ
ರಾಮಕೃಷ್ಣ ಪರಮಹಂಸ ಶಾರದೆಯರ ನಾಡಿದು
ನರನ ಹರಿಯನಾಗಿಸುವ ಸಂಸ್ಕೃತಿಯ ಬೀಡಿದು

ರಾಷ್ಟ್ರದ ಶಿರದಿಂದ ಪಾದ ವಿವಿಧ ಸಂಸ್ಕೃತಿಯ ನಿನಾದ
ಎಲ್ಲ ಸೇರಿ ರಿಂಗಣಿಸಲು ಮನದಿಂದಲೆ ನಾಶ ಬೇಧ
ಉತ್ತರದಲಿ ಹಿಮಪರ್ವತ ದಕ್ಷಿಣದಲಿ ಕಡಲ ಮೊರೆತ
ನಡುವೆ ನಮ್ಮ ಭಾರತ ಸಂಸ್ಕೃತಿ ಅತಿ ವಿಸ್ತೃತ

ಭೋಗಭೂಮಿ ಕರ್ಮಯೋಗಭೂಮಿಯೆಡೆಗೆ ನಡೆದಿದೆ
ಭಾರತೀಯ ಸಂಸ್ಕೃತಿಯದು ವಿಶ್ವವ್ಯಾಪಿಯಾಗುತಿದೆ
ವಿಶ್ವ ಗಮನ ನಮ್ಮ ಕಡೆಗೆ ಸುಸಮೃದ್ಧ ಬಾಳಿನೆಡೆಗೆ
ನಮ್ಮಿಂದಲೆ ಈ ಸಂಸ್ಕೃತಿಯಾಲಕ್ಷ್ಯವು ಕೂಡದು
ಭೋಗವಿಕೃತಿಯನುಕರಣೆ ಎಂದೆಂದಿಗು ಸಲ್ಲದು

ರಚನೆ: ಎನ್. ರವೀಂದ್ರ ಕುಮಾರ್.

0 Comments:

Post a Comment

Subscribe to Post Comments [Atom]

<< Home