ನಾನು ಬೇರೆ ನೀನು ಬೇರೆ ಎಂದರದುವೆ ವಿಕೃತಿ
ಬೇರೊಂದೇ ನಾವ್ ಕವಲೆನೆ ಭಾರತೀಯ ಸಂಸ್ಕೃತಿ
ನಾವೆಲ್ಲರೂ ಒಂದೇ ಎನಲು ಭಾರತೀಯ ಸಂಸ್ಕೃತಿ
ರಾಷ್ಟ್ರಕೀರ್ತಿ ನಭಕೆ ಒಯ್ದ ವೀರಶ್ರೀ ವಿವೇಕಾನಂದ
ಪಡುವಣಿಗರ ತಿಮಿರಳಿಸಲು ಮೂಡಣದಲಿ ಉದಿಸಿದ
ರಾಮಕೃಷ್ಣ ಪರಮಹಂಸ ಶಾರದೆಯರ ನಾಡಿದು
ನರನ ಹರಿಯನಾಗಿಸುವ ಸಂಸ್ಕೃತಿಯ ಬೀಡಿದು
ರಾಷ್ಟ್ರದ ಶಿರದಿಂದ ಪಾದ ವಿವಿಧ ಸಂಸ್ಕೃತಿಯ ನಿನಾದ
ಎಲ್ಲ ಸೇರಿ ರಿಂಗಣಿಸಲು ಮನದಿಂದಲೆ ನಾಶ ಬೇಧ
ಉತ್ತರದಲಿ ಹಿಮಪರ್ವತ ದಕ್ಷಿಣದಲಿ ಕಡಲ ಮೊರೆತ
ನಡುವೆ ನಮ್ಮ ಭಾರತ ಸಂಸ್ಕೃತಿ ಅತಿ ವಿಸ್ತೃತ
ಭೋಗಭೂಮಿ ಕರ್ಮಯೋಗಭೂಮಿಯೆಡೆಗೆ ನಡೆದಿದೆ
ಭಾರತೀಯ ಸಂಸ್ಕೃತಿಯದು ವಿಶ್ವವ್ಯಾಪಿಯಾಗುತಿದೆ
ವಿಶ್ವ ಗಮನ ನಮ್ಮ ಕಡೆಗೆ ಸುಸಮೃದ್ಧ ಬಾಳಿನೆಡೆಗೆ
ನಮ್ಮಿಂದಲೆ ಈ ಸಂಸ್ಕೃತಿಯಾಲಕ್ಷ್ಯವು ಕೂಡದು
ಭೋಗವಿಕೃತಿಯನುಕರಣೆ ಎಂದೆಂದಿಗು ಸಲ್ಲದು
ರಚನೆ: ಎನ್. ರವೀಂದ್ರ ಕುಮಾರ್.
ಬೇರೊಂದೇ ನಾವ್ ಕವಲೆನೆ ಭಾರತೀಯ ಸಂಸ್ಕೃತಿ
ನಾವೆಲ್ಲರೂ ಒಂದೇ ಎನಲು ಭಾರತೀಯ ಸಂಸ್ಕೃತಿ
ರಾಷ್ಟ್ರಕೀರ್ತಿ ನಭಕೆ ಒಯ್ದ ವೀರಶ್ರೀ ವಿವೇಕಾನಂದ
ಪಡುವಣಿಗರ ತಿಮಿರಳಿಸಲು ಮೂಡಣದಲಿ ಉದಿಸಿದ
ರಾಮಕೃಷ್ಣ ಪರಮಹಂಸ ಶಾರದೆಯರ ನಾಡಿದು
ನರನ ಹರಿಯನಾಗಿಸುವ ಸಂಸ್ಕೃತಿಯ ಬೀಡಿದು
ರಾಷ್ಟ್ರದ ಶಿರದಿಂದ ಪಾದ ವಿವಿಧ ಸಂಸ್ಕೃತಿಯ ನಿನಾದ
ಎಲ್ಲ ಸೇರಿ ರಿಂಗಣಿಸಲು ಮನದಿಂದಲೆ ನಾಶ ಬೇಧ
ಉತ್ತರದಲಿ ಹಿಮಪರ್ವತ ದಕ್ಷಿಣದಲಿ ಕಡಲ ಮೊರೆತ
ನಡುವೆ ನಮ್ಮ ಭಾರತ ಸಂಸ್ಕೃತಿ ಅತಿ ವಿಸ್ತೃತ
ಭೋಗಭೂಮಿ ಕರ್ಮಯೋಗಭೂಮಿಯೆಡೆಗೆ ನಡೆದಿದೆ
ಭಾರತೀಯ ಸಂಸ್ಕೃತಿಯದು ವಿಶ್ವವ್ಯಾಪಿಯಾಗುತಿದೆ
ವಿಶ್ವ ಗಮನ ನಮ್ಮ ಕಡೆಗೆ ಸುಸಮೃದ್ಧ ಬಾಳಿನೆಡೆಗೆ
ನಮ್ಮಿಂದಲೆ ಈ ಸಂಸ್ಕೃತಿಯಾಲಕ್ಷ್ಯವು ಕೂಡದು
ಭೋಗವಿಕೃತಿಯನುಕರಣೆ ಎಂದೆಂದಿಗು ಸಲ್ಲದು
ರಚನೆ: ಎನ್. ರವೀಂದ್ರ ಕುಮಾರ್.

0 Comments:
Post a Comment
Subscribe to Post Comments [Atom]
<< Home